ಭೂ ನೀತಿ ಸುಧಾರಣೆ:
ಭಾರತವು ಕಳೆದ ಕೆಲ ದಶಕಗಳಿಂದ ಕುಸಿಯುತ್ತಿರುವ ಆರ್ಥಿಕತೆ ಮತ್ತೊಂದೆಡೆ ಹೆಚ್ಚುತ್ತಿರುವ ಪ್ರಗತಿ ದರಗಳ ನಡುವೆ ಹೋರಾಡುತ್ತಿದೆ. ಇದು ನಮ್ಮ ಆರ್ಥಿಕ ಭವಿಷ್ಯದ ಸಂಕಷ್ಟಗಳು, ಭೂಮಿ ಸಂಬಂಧಿ ಸಮಸ್ಯೆಗಳನ್ನು ತೋರಿಸುತ್ತದೆ. ಈ ರೀತಿ ಸಮಸ್ಯೆಯುಂಟಾಗಲು ಎರಡು ಕಾರಣಗಳಿವೆ.
ಅಭಿವೃದ್ಧಿಗಾಗಿ ಸಂಪನ್ಮೂಲಗಳನ್ನು ಕೃಷಿಯಿಂದ ಉತ್ಪಾದನೆ ಮತ್ತಿತರ ಸೇವೆಗಳ ಸಲುವಾಗಿ ಪುನರ್ ವಿಂಗಡಿಸುವುದು ಅನಿವಾರ್ಯವಾಗಿದೆ. ಕೃಷಿ ಉತ್ಪಾದನೆಯಲ್ಲಿ ಕ್ಷಿಪ್ರಗತಿಯಲ್ಲಿ ಸುಧಾರಣೆ ತರದೆ ಮತ್ತು ಕಾರ್ಖಾನೆಗಳಿಗೆ ಅಗತ್ಯವಿರುವ ಸಿಬ್ಬಂದಿಯನ್ನು ಒದಗಿಸದೆ ಈ ರಾಚನಿಕ ರೂಪಾಂತರವನ್ನು ಸಾಧಿಸಲು ಸಾಧ್ಯವಿಲ್ಲ. ಭಾರತೀಯ ಕೃಷಿಯಲ್ಲಿ ಕಡಿಮೆ ಉತ್ಪನ್ನದ ಕಾರಣದಿಂದಾಗಿಯೇ ಭೂ ಮಾರುಕಟ್ಟೆಯಲ್ಲಿ ಹಲವು ತೊಂದರೆಗಳು ಉಂಟಾಗಿವೆ. ಅಸಮಾನತೆ, ವಿಘಟನೆ, ಭೂ ಸಂಬಂಧಿ ಪತ್ರಗಳು ಸೂಕ್ತವಾಗಿಲ್ಲದಿರುವುದು, ಅರಿಯಿರದ ಮತ್ತು ಸಾಮಾನ್ಯವಾಗಿ ಅಸುರಕ್ಷಿತ ಆಸ್ತಿ ಹಕ್ಕುಗಳು, ಹಿಡುವಳಿಗೆ ಸಂಬಂಧಿಸದಂತೆ ಅಡ್ಡಿಯುಂಟಾಗುತ್ತದೆ ಮತ್ತು ಭೂಮಿಯ ಪತ್ರಗಳನ್ನು ಯಾವುದೇ ರೀತಿಯಲ್ಲೂ ಬಳಸಲು ಸಹಕಾರಿಯಾಗಿರುವುದಿಲ್ಲ. ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸದೆ ಹೋದರೆ ಮುಂದೆ ಆಹಾರ ಸರಬರಾಜು ಮಾಡಲು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.
ಭೂಮಿ ಮುಖ್ಯವಾಗಲು ಎರಡನೇ ಕಾರಣವೆಂದರೆ ನಮ್ಮಲ್ಲಿನ ಅತಿ ಹೆಚ್ಚು ಜನಸಂಖ್ಯೆ ಲಭ್ಯವಿರುವ ಫಲವತ್ತಾದ ಭೂಮಿಯಲ್ಲೇ ವಸತಿಗೂ ಸ್ಥಳಾವಕಾಶ ನೀಡಬೇಕಾಗಿದೆ. ಭಾರತದಲ್ಲಿ ಕೃಷಿಯೇತರ ಉತ್ಪಾದನಾ ಕಾರ್ಯಕ್ಕೆ ಬೇಕಾಗಿರುವ ಭೂಮಿಗಾಗಿ ಕೃಷಿ ಭೂಮಿಯನ್ನು ಬಲಿ ಕೊಡಬೇಕಾಗಿದೆ. ದೇಶದಾದ್ಯಂತ ಭೂ ಒತ್ತುವರಿ ಮಾಡುವ ವಿರುದ್ಧ ಹೋರಾಟ ಕಳೆದ ಕೆಲದಶಕಗಳಿಂದ ಹೆಚ್ಚಾಗಿದೆ. ನರ್ಮದಾ ಬಚಾವೋ ಆಂದೋಲನದಿಂದ ಸಿಂಗನೂರುವರೆಗೆ ಈ ಹೋರಾಟವನ್ನು ಕಾಣಬಹುದಾಗಿದೆ. ಇನ್ನು ಮುಂದೆ ಅಭಿವೃದ್ಧಿಯ ಹೆಸರಿನಲ್ಲಿ ಬಡಜನರನ್ನು ಒಕ್ಕಲೆಬ್ಬಿಸುವುದು ಸಾಧ್ಯವಿಲ್ಲ ಎನ್ನುವುದನ್ನು ಸಾರುವ ಪ್ರಬುದ್ಧ ಪ್ರಜಾಪ್ರಭುತ್ವಕ್ಕೆ ಸಾಕ್ಷಿಯಾಗಿದೆ. ಆದರೂ ಭೂ ಒತ್ತುವರಿ ವಿರುದ್ದದ ಈ ಹೋರಾಟಗಳು ಪ್ರತಿರೋಧ ಮತ್ತು ಅಭಿವೃದ್ಧಿಯಲ್ಲಿ ಪಾಲುದಾರಿಕೆಗೆ ಒತ್ತಾಯಿಸುವುದಕ್ಕೆ ಸೀಮಿತವಾಗಿದ್ದು ಅದನ್ನು ಮೀರಿ ಬೆಳೆದಿಲ್ಲ. ರಾಜಕೀಯ ವರ್ಗಗಳು ಮತ್ತು ಸರ್ಕಾರಿ ಸಂಸ್ಥೆಗಳು ಕೂಡ ದುರ್ಬಲರ ಹಿತರಕ್ಷಣೆ ಮಾಡುವ ರೀತಿಯಲ್ಲಿ ವ್ಯವಸ್ಥೆ ರೂಪಿಸುವಲ್ಲಿ ಸೋತಿವೆ. ಇದರರ್ಥ ಸಮಸ್ಯೆಗಳನ್ನು ಗುರುತಿಸಲಾಗಿಲ್ಲ ಅಥವಾ ಕಾನೂನು ಪ್ರಯತ್ನಗಳು ನಡೆದೇ ಇಲ್ಲ ಎಂದಲ್ಲ. ಈ ಎರಡೂ ಪ್ರಮುಖ ಕಾನೂನುಗಳೆಂದರೆ ಆಹಾರ ಭದ್ರತೆ ಮತ್ತು ಭೂ ಸ್ವಾಧೀನತೆಗೆ ಸಂಬಂಧಿಸಿದ್ದು, ಇದರೊಂದಿಗೆ ಭೂ ಸುಧಾರಣೆಗೆ ಸಂಬಂಧಿಸಿದ ಮಸೂದೆಗೆ ಕೂಡ ಜಾರಿಯಾಗುವ ಹಂತದಲ್ಲಿದೆ.
ಮೊದಲ ಭಾಗ ಓದಿರದಿದ್ದರೆ ಇಲ್ಲಿ ಒತ್ತಿರಿ. CLICK HERE
ಭೂ ಸ್ವಾಧೀನ ಕಾಯಿದೆ:
ಭಾರತದಲ್ಲಿ ಭೂಮಿಗೆ ಸಂಬಂಧಿಸಿದಂತೆ ಅಗತ್ಯವಿದ್ದ ಚೌಕಟ್ಟನ್ನು 1894 ರ ಭೂಸ್ವಾಧೀನ ಕಾಯಿದೆಯು ರೂಪಿಸಿತ್ತು. ಈ ಕಾನೂನಿನ ಪ್ರಕಾರ ಪರಿಹಾರಧನವು ಆ ಪ್ರದೇಶದಲ್ಲಿನ ಮಾರುಕಟ್ಟೆ ದರ ಮತ್ತು ಆ ಸಮಯದಲ್ಲಿ ಅಲ್ಲಿನ ಮಾರಾಟ ದರಗಳನ್ನು ಆಧರಿಸಿರುತ್ತದೆ. ಹೊಸ ಕಾನೂನು ಮೂರು ಮುಖ್ಯ ಬದಲಾವಣೆಗಳನ್ನು ತರುತ್ತದೆ.
ಮೊದಲನೆಯದು ಪರಿಹಾರಧನವು ಪಟ್ಟಣ ಪ್ರದೇಶಗಳಲ್ಲಿ ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಾಲ್ಕು ಪಟ್ಟು ಹೆಚ್ಚಿರಬೇಕು.
ಎರಡನೇಯದು ಭೂಮಿಯ ಒಡೆಯರು ಹಾಗೂ ಆ ಭೂಮಿಯನ್ನು ಆಧರಿಸಿದ ಇತರರಿಗೂ ಪುನರ್ವಸತಿ ಕಲ್ಪಿಸಿಕೊಡಬೇಕು.
ಮೂರನೆಯದು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಹಲವು ತೊಂದರೆಗಳಿವೆ. ಈಗ ಸ್ವಾಧೀನಕ್ಕೆ ಹಲವು ಸಮಿತಿಗಳ ಒಪ್ಪಿಗೆ ಪಡೆಯಬೇಕಾಗುತ್ತದೆ ಮತ್ತು ಖಾಸಗಿ ಕಂಪನಿಗಳಾದರೆ ಸಂತ್ರಪ್ತ ಜನರಲ್ಲಿ ಶೇ.70 ರಷ್ಟು ಮಂದಿಯ ಒಪ್ಪಿಗೆ ಪಡೆಯಬೇಕಾಗುತ್ತದೆ. ಹೊಸ ಕಾನೂನನ್ನು ಮೌಲ್ಯಮಾಪನ ಮಾಡಲು ಹಳೆಯ ಕಾನೂನಿನಲ್ಲಿ ಏನು ತಪ್ಪುಗಳಿದ್ದವು ಎಂದು ತಿಳಿಯಬೇಕಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಮಾರುಕಟ್ಟೆಯ ದರವನ್ನಾಧರಿಸಿ ಪರಿಹಾರಧನ ಎನ್ನುವ ತತ್ವ ಸರಿಯಿಲ್ಲ.
ಭೂಮಿಯ ಒಡೆಯನಿಗೆ ನೀಡಲಾಗುವ ಮೊತ್ತ ಮಾರುಕಟ್ಟೆಯ ದರ ಒಂದೇ ಅಲ್ಲ. ಇದರೊಂದಿಗೆ ಇನ್ನೂ ಹಲವು ಅಂಶಗಳಾದ ಉತ್ಪಾದನೆ, ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ, ಆಹಾರ ಭದ್ರತೆ, ಹಣದುಬ್ಬರದ ವಿರುದ್ದ ರಕ್ಷಣೆ, ಸಾಮಾಜಿಕ ಸ್ಥಿತಿ, ಸಹಕಾರ ಮೊದಲಾದವು ಸೇರಿವೆ. ಭೂಮಿಯ ಮೌಲ್ಯ ಇದು ವ್ಯಕ್ತಿಗತವಾಗಿರುತ್ತದೆ ಮತ್ತು ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ. ಹಲವು ಮಾಲೀಕರು ಮಾರುಕಟ್ಟೆ ದರಕ್ಕಿಂತ ಹೆಚ್ಚಿನದನ್ನು ಬೇಡುವುದುಂಟು. ಆದ್ದರಿಂದಲೇ ಆ ಭೂಮಿ ಮಾರಾಟವಾಗಿರುವುದಿಲ್ಲ.
ಹಿಂದಿನ ಮಾರಾಟ ದರವನ್ನು ಮಾರುಕಟ್ಟೆ ದರವನ್ನು ಆಧರಿಸಿ ಪರಿಹಾರಧನವನ್ನು ನೀಡಬಾರದು ಎನ್ನುವುದಕ್ಕೆ ಎರಡು ಕಾರಣಗಳಿವೆ. ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದರಿಂದ ಸ್ಥಳೀಯ ಕೃಷಿ ಆರ್ಥಿಕತೆಗೆ ಆಘಾತ ಉಂಟುಮಾಡುತ್ತದೆ ಮತ್ತು ಬೇಡಿಕೆ ಮತ್ತು ಪೂರೈಕೆ ನಿಯಮದಂತೆ ಭೂಮಿಯ ಬೆಲೆಯನ್ನು ಮತ್ತು ಬಾಡಿಗೆಯನ್ನು ಹೆಚ್ಚಿಸುತ್ತದೆ. ಭೂಮಿಯ ಬೆಲೆ ಹೀಗೆ ವೇಗವಾಗಿ ಹೆಚ್ಚಾದರೆ ಭೂಮಾಲೀಕರು ಉಳಿದಿರುವ ಕೃಷಿ ಭೂಮಿಯನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಯೋಜನೆಯು ಆ ಪ್ರದೇಶಕ್ಕೆ ಕೈಗಾರಿಕೆಗಳನ್ನು ಆಕರ್ಷಿಸುವ ಮೂಲಕ ಆರ್ಥಿಕತೆಯ ಮೇಲೆ ಅನಿರೀಕ್ಷಿತ ಪರಿಣಾಮ ಬೀರಿ ಭೂಮಿಯ ಬೆಲೆಗಳಲ್ಲಿ ಹೆಚ್ಚಳ ಉಂಟುಮಾಡುತ್ತದೆ. ದಾಖಲಾದ ದರಗಳು ನಂಬಲರ್ಹವಾಗಿಲ್ಲದಿರುವುದಕ್ಕೆ ಮತ್ತೊಂದು ಕಾರಣವೆಂದರೆ ಭಾರತದಲ್ಲಿ ವಾಸ್ತವದ ಮಾರಾಟ ದರವನ್ನು ಸ್ಟಾಂಪ್ ಸುಂಕದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮರೆಮಾಚಲಾಗುತ್ತದೆ. ಈ ಚರ್ಚೆಯ ಬೆಳಕಿನಲ್ಲಿ ನೋಡಿದಾಗ ಪರಿಹಾರಧನವು ಮಾರುಕಟ್ಟೆ ದರಕ್ಕಿಂತ ಕಡಿಮೆಯಿರುತ್ತದೆ ಎನ್ನುವುದು ತಿಳಿಯುತ್ತದೆ. ಅದನ್ನು ಎಷ್ಟು ಹೆಚ್ಚಿಸಬೇಕು ಎನ್ನುವುದು ಪ್ರತಿ ಸಂದರ್ಭ ಮತ್ತು ಪ್ರದೇಶವನ್ನು ಆಧರಿಸಿರುತ್ತದೆ. ಮಾರುಕಟ್ಟೆ ದರದಲ್ಲಿನ ಅಸಮರ್ಪಕತೆ, ಪಡೆದಿರುವ ಭೂಮಿ, ಭೂಮಿಯನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತದೆ, ಭೂಮಿಯನ್ನು ಕಳೆದುಕೊಂಡ ರೈತರ ಸ್ಥಿತಿ ಈ ವಿಷಯವಾಗಿ ಇವೆಲ್ಲವೂ ಪರಿಹಾರಧನವನ್ನು ನಿರ್ಣಯಿಸುತ್ತದೆ. ಏಕರೂಪತೆಯಿಲ್ಲದಿರುವುದಕ್ಕೆ ಸಾಕ್ಷಿಗಳಿವೆ. ಇತ್ತೀಚೆಗೆ ಸಿಂಗನೂರಿನಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾದವರ ಸರ್ವೇ ಮಾಡಿದ ಪ್ರಕಾರ ಮಾಲಿಕರಿಗೆ ನೀಡಲಾದ ಬೆಲೆಗಳಲ್ಲಿ ಏಕರೂಪತೆ ಇಲ್ಲದಿರುವುದು ಕಂಡುಬಂದಿದೆ. ಮತ್ತು ಇದು ಭೂ ಸ್ವಾಧೀನಕ್ಕೆ ವಿರೋಧವನ್ನು ವ್ಯಕ್ತಪಡಿಸಲು ಮುಖ್ಯಕಾರಣವಾಗಿದೆ.
ಪಶ್ಚಿಮ ಬಂಗಾಳ ಸರ್ಕಾರವು ಮಾಲೀಕರಿಗೆ ನೀಡಿದ ಬೆಲೆಗಳು ಮಾಲೀಕರೆ ಹೇಳುವಂತೆ, ಸರಾಸರಿ ಮಾರುಕಟ್ಟೆ ದರದಷ್ಟಿತ್ತು. ಆದರೂ ಸುಮಾರು ಒಂದನೇ ಮೂರರಷ್ಟು ಮಾಲೀಕರು ಪರಿಹಾರಧನವನ್ನು ನಿರಾಕರಿಸಿ ಭೂಸ್ವಾಧೀನವನ್ನು ವಿರೋಧಿಸಿದರು. ಇದಕ್ಕೆ ಕಾರಣವೇನೆಂದರೆ ಪರಿಹಾರಧನವು ಪ್ರತ್ಯೇಕ ಭೂಮಿಯ ವಿವರಗಳು ನೀರಾವರಿ ಅಥವಾ ಬಹು ಬೆಳೆ ಅಥವಾ ಸಾರ್ವಜನಿಕ ಸಂಪರ್ಕ ಸಾರಿಗೆ ಸೌಲಭ್ಯ ಮೊದಲಾದವುಗಳನ್ನು ಆಧರಿಸಿರದೇ ಇಲ್ಲದಿರುವುದು. ಯಾರ ಬದುಕಿನ ಆರ್ಥಿಕತೆ ಕೃಷಿಯನ್ನೇ ಆಧರಿಸಿರುತ್ತದೋ, ಅಥವಾ ಯಾವ ಮನೆಯಲ್ಲಿ ವಯಸ್ಕರು ಹೆಚ್ಚಾಗಿ ಕೆಲಸ ಮಾಡುತ್ತಿರುತ್ತಾರೋ ಅಂತಹವರು ಈ ರೀತಿಯ ಬೆಲೆಯನ್ನು ಒಪ್ಪಿಕೊಳ್ಳುವುದಿಲ್ಲ. ಈ ಅಂಶಗಳು ಆದಾಯ ಭದ್ರತೆಯನ್ನು ಮುಖ್ಯವಾಗಿ ಪರಿಗಣಿಸಬೇಕು ಎಂದು ಸೂಚಿಸುತ್ತದೆ ಮತ್ತು ಪರ್ಯಾಯ ಭೂಮಿಯು ಕೃಷಿ ಯೋಗ್ಯವಾಗಿದ್ದು ವರ್ಗಾವಣೆ ಮಾಡುವಂತಿರಬಾರದು ಎಂಬುದನ್ನು ಸೂಚಿಸುತ್ತದೆ. ಯಾರಿಗೆ ಹೆಚ್ಚಿನ ಲಾಭದ ಕಡೆ ಗಮನವಿರುತ್ತದೋ (ಯಾರ ಭೂಮಿ ಪಿತ್ರಾರ್ಜಿತವಾಗಿರದೆ ಕೊಂಡುಕೊಂಡದ್ದಾಗಿರುತ್ತದೆ ಅಂತಹವರು ಅಥವಾ ಭೂಮಾಲೀಕರ ಅನುಪಸ್ಥಿತಿಯಲ್ಲಿ) ಅಂತಹವರು ಕೂಡ ಈ ದರವನ್ನು ಒಪ್ಪಿಕೊಳ್ಳುವುದಿಲ್ಲ. ಹೊಸ ಕಾನೂನಿನಲ್ಲಿ ನಿಖರ ಬೆಲೆಯನ್ನು ಪರಿಚಯಿಸಲಾಗಿದೆ (ನಗರ ಗ್ರಾಮಾಂತರ ವರ್ಗೀಕರಣವನ್ನು ಮಾತ್ರ ಉಳಿಸಿಕೊಳ್ಳಲಾಗಿದೆ). ಆದರಿದು ದೇಶದ ಎಲ್ಲ ಭಾಗಗಳಲ್ಲಿ ಯಶಸ್ವಿಯಾಗುತ್ತದೆ ಎಂದು ಹೇಳಲಾಗುವುದಿಲ್ಲ. ಸರಿಯಾದ ಅಂಕಿಅಂಶಗಳನ್ನು ಪಡೆಯುವುದು ಕಷ್ಟವಾದ್ದರಿಂದ ಈ ಸಮಸ್ಯೆ ಉಂಟಾಗಿದೆ. ಒಂದು ವೇಳೆ ಪರಿಹಾರಧನವನ್ನು ಹೆಚ್ಚಿಸಿದರೆ ಭೂಸ್ವಾಧೀನ ಕಷ್ಟವಾಗುತ್ತದೆ ಮತ್ತು ಇದರಿಂದ ಕೈಗಾರೀಕರಣ ಪ್ರಕ್ರಿಯೆ ಕುಂಠಿತವಾಗುತ್ತದೆ. ಇದಲ್ಲದೆ ಭೂಪರಿವರ್ತನೆಯಿಂದ ಕೃಷಿಕರಿಗೆ ಸಿಗಬಹುದಾಗಿದ್ದ ಲಾಭ ಕೂಡ ತಪ್ಪಿಹೋಗುತ್ತದೆ. ಒಂದು ವೇಳೆ ಪರಿಹಾರಧನವು ಕಡಿಮೆಯಾದರೆ ಸಿಂಗನೂರಿನಲ್ಲಿ ಉಂಟಾದಂತಹ ಸಮಸ್ಯೆಗಳು ತಲೆಯೆತ್ತುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಎರಡು ಅಥವಾ ನಾಲ್ಕು ಪಟ್ಟು ಎಂದು ಲಾಭವನ್ನು ಗುಣಿಸುವ ಮಾರ್ಗವನ್ನೇ ಏಕೆ ಆಯ್ದುಕೊಳ್ಳಲಾಗಿದೆ ಎನ್ನುವುದಕ್ಕೆ ವಿವರಣೆಗಳಿಲ್ಲ.
ಪರ್ಯಾಯ ದಾರಿಗಳು:
ಭೂಮಿ ಹರಾಜು
ಘಾಟಕ್ ಮತ್ತು ಘೋಷ್ (2011)ರ ಪ್ರಕಾರ 2013 ರ ಭೂಸ್ವಾಧೀನ ಕಾಯ್ದೆ ಅನ್ವಯ ಅನಿಯಂತ್ರಿತ ಮತ್ತು ಕಟ್ಟುನಿಟ್ಟಿನ ನಿಖರ ಬೆಲೆಯನ್ನು ನಿಗದಿಗೊಳಿಸುವ ಬದಲು ಹರಾಜು ಹಾಕುವ ಮೂಲಕ ಭೂಮಿಗೆ ಬೆಲೆ ಕಟ್ಟುವುದು ಹೆಚ್ಚು ಒಳ್ಳೆಯದು.
ಮೊದಲಿಗೆ ಸರ್ಕಾರವು ತನ್ನ ಯೋಜನೆಗೆ ತಕ್ಕಷ್ಟು ಭೂಮಿಯನ್ನು ನಿಯೋಜಿತ ಪ್ರದೇಶದಲ್ಲಿ ಹರಾಜಿನ ಮೂಲಕ ಕೊಂಡುಕೊಳ್ಳಬೇಕು. ನಂತರ ಉದ್ದೇಶಿತ ಯೋಜನೆಯಡಿಯಲ್ಲಿನ ನಿವೇಶನ ಭಾಗದಲ್ಲಿ ಯಾರ ಭೂಮಿ ಮಾರಾಟವಾಗಿರುವುದಿಲ್ಲವೋ ಅಂತಹ ಭೂಮಾಲಿಕರಿಗೆ ಅಲ್ಲಿನ ಭೂಮಿಗೆ ಬದಲಾಗಿ ಮತ್ತೊಂದು ಪ್ರದೇಶದಲ್ಲಿ ಅಷ್ಟೇ ಅಳತೆಯ ಭೂಮಿಯನ್ನು ನೀಡಬಹುದು. ಇದು ಉದ್ದೇಶಿತ ಯೋಜನೆಯ ಪ್ರದೇಶವನ್ನು ಒಟ್ಟುಗೂಡಿಸುತ್ತದೆ. ಈ ಪ್ರಕ್ರಿಯೆಯಿಂದ ಎರಡು ಉಪಯೋಗಗಳಿವೆ. ಮೊದಲನೆಯದು ಬೆಲೆ ನಿಗದಿಯಲ್ಲಿ ಪಾರದರ್ಶಕತೆಯಿರುತ್ತದೆ. ಭ್ರಷ್ಟ ಅಧಿಕಾರಿಗಳ ಕೈಯಿಂದ ಮುಕ್ತವಾಗಿ ರೈತರು ಸ್ವತಃ ತಮ್ಮ ಭೂಮಿಗೆ ಸ್ಪರ್ಧಾತ್ಮಕವಾಗಿ ಹರಾಜಿನ ಮೂಲಕ ನಿರ್ಧರಿಸಬಹುದು. ಇದರಿಂದ ದಬ್ಬಾಳಿಕೆ ಮತ್ತು ಅಭಿವೃದ್ಧಿ ವಿರೋಧಿಯಾದ ರಾಜಕೀಯ ಕೂಡ ಕಡಿಮೆಯಾಗುತ್ತದೆ. ಮಾರುಕಟ್ಟೆ ಮೌಲ್ಯವನ್ನು ಆಧರಿಸಿದ ಪೂರ್ವನಿರ್ಧಾರಿತಕ್ಕೆ ಬದಲಾಗಿ ಪ್ರಸ್ತುತ ಭೂಮೌಲ್ಯವನ್ನು ಮಾಲೀಕರಿಗೆ ದೊರಕುವಂತೆ ಮಾಡುತ್ತದೆ.
ಎರಡನೆಯದಾಗಿ ಹೆಚ್ಚಿನ ಬೆಲೆಯ ಬೇಡಿಕೆಯಿಟ್ಟ ರೈತರಿಗೆ ಬದಲಿ ಭೂಮಿಯನ್ನು ಕೊಡಿಸುತ್ತದೆ. ರೈತರು ಹೆಚ್ಚಿನ ಮೌಲ್ಯಕ್ಕೆ ಒತ್ತಾಯಿಸಿದರೆ ಹಣಕ್ಕೆ ಬದಲಾಗಿ ಬದಲಿ ಭೂಮಿಯನ್ನೇ ಪಡೆಯಬಹುದು. ಹರಾಜಿನಿಂದ ಭೂ ಮಾರುಕಟ್ಟೆಯ ಸ್ಥಿತಿ ಕೂಡ ಉತ್ತಮವಾಗುತ್ತದೆ. ಈ ಹರಾಜು ರೀತಿಯನ್ನು ಇನ್ನೂ ಹಲವು ದಿಕ್ಕುಗಳಲ್ಲಿ ವಿಸ್ತರಿಸಬಹುದು. ಹರಾಜನ್ನು ವಿವಿಧ ಹಂತಗಳಿಗೆ ವಿಸ್ತರಿಸುವ ಮೂಲಕ ಕೈಗಾರಿಕಾ ಸ್ಥಾಪನೆಯ ಪ್ರದೇಶದ ಆಯ್ಕೆಯನ್ನು ಮಾಡಬಹುದು. ಮೊದಲನೇ ಹಂತದಲ್ಲಿ ಸ್ಥಾಪನೆಗೊಳ್ಳಬೇಕಾದ ಕೈಗಾರಿಕೆ ಅಥವಾ ಸರ್ಕಾರ ಒಂದು ಮೊತ್ತ ಮತ್ತು ಎಷ್ಟು ಭೂಮಿ ಬೇಕು ಎಂದು ನಿರ್ಧರಿಸಬೇಕು. ನಂತರ ವಿವಿಧ ಸಂಸ್ಥೆಗಳನ್ನು ತಮ್ಮ ಪ್ರದೇಶಗಳಲ್ಲಿ ಕೈಗಾರಿಕಾ ಸ್ಥಾಪನೆಗಾಗಿ ಒಂದು ಮೊತ್ತದ ಹಣವನ್ನು ಹರಾಜಿಗೆ ನಿರ್ಧರಿಸುವಂತೆ ಹೇಳಬಹುದು. ಈ ಮೊತ್ತವು ತಮ್ಮ ಪ್ರದೇಶಗಳಲ್ಲಿ ಅಗತ್ಯವಿರುವ ಭೂಮಿಯನ್ನು ಅಲ್ಲಿನ ಭೂಮಾಲಿಕರಿಂದ ಕೊಳ್ಳುವ ಮೊತ್ತಕ್ಕೆ ಸಮನಾದ ಕನಿಷ್ಠ ಮೊತ್ತವಾಗಿರಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡಬಯಸುವ ಭೂಸ್ವಾಧೀನವನ್ನು ಸ್ಥಳೀಯ ಪಂಚಾಯತಿಗಳಿಗೆ ತಮ್ಮ ಪ್ರದೇಶಗಳಲ್ಲಿ ಹರಾಜು ನಡೆಸುವ ಜವಾಬ್ದಾರಿಯನ್ನು ವಹಿಸಬಹುದು. ಇಂತಹ ಸಂದರ್ಭದಲ್ಲಿ ಪಂಚಾಯತಿ ನಾಯಕರಿಗೆ ಅಧಿಕಾರಿಗಳು ಈ ವಿಷಯವಾಗಿ ತರಬೇತಿ ನೀಡಬೇಕು. ಇದರಿಂದ ಅವರಿಗೆ ಪಂಚಾಯತಿಯ ಮೂಲಕ ತಂತಮ್ಮ ಪ್ರದೇಶಗಳಲ್ಲಿ ವ್ಯಾಪಾರ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಹಾಯವಾಗುತ್ತದೆ.
ರಾಜ್ಯಸರ್ಕಾರಗಳು ಭೂ ಸ್ವಾಧೀನದಲ್ಲಿ ಪಾತ್ರವಹಿಸಬೇಕು. ಏಕೆಂದರೆ ಭಾರತದಲ್ಲಿ ಭೂ ಮಾರುಕಟ್ಟೆಯು ಅಸಮರ್ಪಕವಾಗಿದೆ ಮತ್ತು ಭೂಖರೀದಿದಾರರು ಮತ್ತು ಮಾರಾಟಗಾರರ ನಡುವೆ ಸರಿಯಾದ ಮಾಹಿತಿ ವಿನಿಮಯವಿರುವುದಿಲ್ಲ. ಒಂದು ಮಾರುಕಟ್ಟೆಯಲ್ಲಿ ಇಂತಹ ನ್ಯೂನ್ಯತೆಗಳಿದ್ದರೆ ಅದು ಅಳವಡಿಸಿಕೊಳ್ಳಬೇಕಾದ ಕ್ರಮಗಳೆಂದರೆ,
ಅ) ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರುಕಟ್ಟೆಯಲ್ಲಿ ಬಳಕೆಯಲ್ಲಿರುವ ದರಗಳನ್ನು ತಿಳಿದುಕೊಳ್ಳಬೇಕು ಮತ್ತು ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬೇಕು ಹಾಗೂ ಎಲ್ಲರ ಮೇಲೂ ಅದು ಬೀರುವ ಆರ್ಥಿಕ ಪರಿಣಾಮಗಳನ್ನು ತಿಳಿದಿರಬೇಕು.
ಆ) ಮಾರುಕಟ್ಟೆಯಲ್ಲಿ ಭೂಸ್ವಾಧೀನಕ್ಕೂ ಮೊದಲು ರೈತರು ನಡೆಸಿರುವ ಮಾರಾಟಗಳನ್ನು ತಿಳಿದುಕೊಳ್ಳಬೇಕು. ನಾವು ಸೂಚಿಸುತ್ತಿರುವ ಹರಾಜು ಈ ಬಗೆಯದು ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ ಜಾರಿಯಾಗಿರುವ ಹೊಸ ಕಾನೂನು ತರ್ಕರಹಿತವಾಗಿದೆ. ಇದು ಮಾರುಕಟ್ಟೆಯ ಅಸಮರ್ಪಕತೆಯನ್ನು ಸರಿಪಡಿಸುವುದಿಲ್ಲ. ಬದಲಿಗೆ ಇದು ಊಹೆಯ ಮೂಲಕ ವಿಷಯಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ.
ಗ್ರಾಮೀಣ ಭೂ ಮಾರುಕಟ್ಟೆ ಪುನರುಜ್ಜೀವನ:
ಗ್ರಾಮೀಣ ಭೂ ಮಾರುಕಟ್ಟೆಗಳು ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಹಲವು ಕಾರಣಗಳಿವೆ.
ಭೂ ದಾಖಲೆಗಳು ಸರಿಯಾಗಿರದೆ ಇರುವುದರಿಂದ ಮಾಲಿಕತ್ವವನ್ನು ವರ್ಗಾಯಿಸಲು ತೊಂದರೆಗಳು, ಹಿಡುವಳಿ ಮತ್ತು ಭೂಮಿತಿ ಕಾಯ್ದೆಗಳು ಮಾಲಿಕತ್ವವನ್ನು ಮರೆಮಾಚುವಂತೆ ಮಾಡುವುದು ಮತ್ತು ಮಾರಾಟದ ಹಾದಿಯಲ್ಲಿನ ತೊಂದರೆಗಳು, ಸರಿಯಾದ ಬೆಲೆತೆತ್ತು ಕೊಳ್ಳುವವರ ಸಂಖ್ಯೆ ಮಿತವಾಗಿರುವುದು. 'ದಳ್ಳಾಳಿ ಸೇವೆಗಳ ಕೊರತೆ ಮತ್ತು ಕೊಳ್ಳುವ ಮತ್ತು ಮಾರುವ ಅವಕಾಶಗಳ ಬಗೆಗಿನ ಮಾಹಿತಿ ಕೊರತೆ, ಭೂಮಿಯನ್ನು ಕೊಳ್ಳಲು ಹಣಕಾಸು ನೆರವು ನೀಡುವ ಬ್ಯಾಂಕುಗಳು ಸೀಮಿತ ವಲಯ ವ್ಯಾಪ್ತಿಯನ್ನು ಹೊಂದಿರುವುದು ಮತ್ತೊಂದು ಸಮಸ್ಯೆಯಾಗಿದೆ.
ಮತ್ತೊಂದೆಡೆ ಎಲ್ಲಿ ವಿಮೆ, ಸಾಲ ಮತ್ತು ಉಳಿತಾಯಗಳ ಅವಕಾಶಗಳು ಸೀಮಿತವಾಗಿರುವುದೋ ಅಲ್ಲಿ ಭೂಮಿ ಕೇವಲ ಆದಾಯ ತರುವಂತಹ ಆಸ್ತಿ ಮಾತ್ರವಾಗಿರುವುದಿಲ್ಲ. ಬದಲಿಗೆ ವಿಮಾಯೋಜನೆ, ಆದಾಯ ಪೂರಕ, ಪಿಂಚಣಿ ಯೋಜನೆ ಎಲ್ಲವೂ ಆಗಿರುತ್ತದೆ. ಆದ್ದರಿಂದ ಒಂದು ವೇಳೆ ಭೂ ಮಾರುಕಟ್ಟೆಗಳು ಸರಾಗವಾಗಿ ಕಾರ್ಯನಿರ್ವಹಿಸಿದರೂ ಬಡ ರೈತರು ತಮ್ಮ ಕೃಷಿಯ ಖರ್ಚುವೆಚ್ಚ ಲಾಭಗಳ ಸರಳ ಲೆಕ್ಕಾಚಾರದ ಆಧಾರದ ಮೇಲೆ ಮಾರಲು ಇಚ್ಚಿಸುವುದಿಲ್ಲ.
ಭೂ ಮತ್ತು ಸಾಲದ ಮಾರುಕಟ್ಟೆಗಳು ಒಂದು ಇನ್ನೊಂದನ್ನು ಪೋಷಿಸುತ್ತಿದ್ದು ಅವು ಅಸಮರ್ಪಕವಾಗಿರುವುದು ಕೂಡ ಇದಕ್ಕೆ ಕಾರಣವಾಗಿದೆ. ಏಕೆಂದರೆ ಭೂಮಿ ಸುಲಭವಾಗಿ ಮಾರಾಟಮಾಡಬಹುದಾದ ಆಸ್ತಿಯಲ್ಲ. ಸಾಲ ಮಾರುಕಟ್ಟೆಯಲ್ಲಿನ ದೋಷಗಳಿಂದಾಗಿ ಮಾಲೀಕರು ಭೂಮಿ ಆಧಾರದ ಮೇಲೆ ಸುಲಭವಾಗಿ ಸಾಲ ಪಡೆಯಲಾಗುವುದಿಲ್ಲ. ಹಣಕಾಸಿನ ನೆರವನ್ನು ಪಡೆಯುವುದು ಕೂಡ ಕಷ್ಟವಾಗಿರುವುದರಿಂದ ಭೂ ಮಾರುಕಟ್ಟೆಯಲ್ಲಿ ಘರ್ಷಣೆಯನ್ನು ಉಂಟುಮಾಡುತ್ತದೆ. ಮತ್ತು ಇದು ಸಣ್ಣ ರೈತರಿಂದ ದೊಡ್ಡ ರೈತರಿಗೆ ಮಾಲೀಕರಿಗೆ ಭೂಮಾಲೀಕತ್ವ ವರ್ಗಾವಣೆಯನ್ನು ತಡೆಯುತ್ತದೆ. ಇದರೊಂದಿಗೆ ರೈತರು ಹೊಸ ದುಬಾರಿ ಕೃಷಿ ತಂತ್ರಜ್ಞಾನಗಳಾದ ಹೈಟೆಕ್ ಬೀಜಗಳು, ರಾಸಾಯನಿಕ ಗೊಬ್ಬರಗಳು ಮತ್ತು ನೀರಾವರಿ ಸಂಬಂಧಿತವಾದುದಕ್ಕೆ ಬಂಡವಾಳ ಹೂಡಲು ಸಾಲ ಮಾರುಕಟ್ಟೆಯಲ್ಲಿನ ನ್ಯೂನ್ಯತೆಗಳೇ ಕಾರಣವಾಗುತ್ತದೆ. ಇವೆಲ್ಲವೂ ಭೂಸುಧಾರಣೆಯ ಅವಶ್ಯಕತೆಯನ್ನು ಒತ್ತಿ ಹೇಳುತ್ತವೆ.
ಕೇವಲ ಸಾಮಾಜಿಕ ನ್ಯಾಯ ಮತ್ತು ಸಮಾನತೆ ದೃಷ್ಟಿಯಿಂದ ಮಾತ್ರವಲ್ಲ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ಕೂಡ ಇದು ಮುಖ್ಯ. ಭೂಮಿಗೆ ಸಂಬಂಧಿಸಿದಂತೆ ಆಸ್ತಿ ಹಕ್ಕುಗಳನ್ನು ಸೂಕ್ತ ರೀತಿಯಲ್ಲಿ ನಿರ್ಧರಿಸುವುದರಿಂದ ಹಿಡುವಳಿಗಳು ಅನುಕೂಲಕರ ಗಾತ್ರಕ್ಕೆ ಹತ್ತಿರವಾಗುತ್ತವೆ. ಉತ್ಪಾದನೆ ಹೆಚ್ಚುತ್ತದೆ. ಪರೋಕ್ಷವಾಗಿ ಸಾಲದ ಮಾರುಕಟ್ಟೆಗಳು ಬಲಿಷ್ಠಗೊಳ್ಳುತ್ತವೆ ಮತ್ತು ಇನ್ನೂ ಹಲವು ಬಗೆಯ ಪರಿಣಾಮಗಳು ಇದರಿಂದ ಉಂಟಾಗುತ್ತವೆ. ಸರ್ಕಾರವು ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರಧನ ಪಡೆಯುವುದು ಕೂಡ ಕಷ್ಟ, ಸಿಂಗೂರಿನ ಘಟನೆಯು ಒಂದನೇ ಮೂರು ಭಾಗದಷ್ಟು ಮಾಲೀಕರು ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕಾರಣವಾದ ಅಪ್ರಸ್ತುತ ಭೂದಾಖಲೆಗಳ ಸಮಸ್ಯೆಯನ್ನು ತೋರುತ್ತದೆ.
ಬಂಗಾಳದಲ್ಲಿ ಕಡೆಯ ಭೂ ಸರ್ವೇಯು 1940 ರಲ್ಲಿ ಬ್ರಿಟಿಷ್ ಸರ್ಕಾರದಿಂದ ನಡೆಸಲ್ಪಟ್ಟಿದೆ. ಭೂಮಿಯನ್ನು ವಿಸ್ತರಿಸಿಕೊಂಡ ಮಾಲಿಕರು ಮತ್ತು ಭ್ರಷ್ಟ ಭೂ ನೋಂದಣಿ ಕಛೇರಿಗಳವರು ಈ ದಾಖಲೆಗಳನ್ನು ನವೀಕರಣ ಮಾಡಿದ್ದಾರೆ. ದಾಖಲೆಗಳ ನವೀಕರಣವು ಆಸ್ತಿ ತೆರಿಗೆಯನ್ನು ಹೆಚ್ಚಾಗಿಸುತ್ತದೆಯಾದ್ದರಿಂದ ಇದಕ್ಕೆ ಹೆಚ್ಚು ಪ್ರೋತ್ಸಾಹ ನೀಡದಿರುವಂತಹ ಸಂಭವನೀಯತೆಯನ್ನು ಹೊಂದಿರುತ್ತದೆ. ಆದ್ದರಿಂದಲೇ ಲಭ್ಯವಿರುವ ದಾಖಲೆಗಳಲ್ಲಿನ ನಮೂದಿತ ದಿನಾಂಕದಿಂದ ಹಲವು ನಿವೇಶನಗಳ ನೀರಾವರಿ ಸ್ಥಿತಿ ಬದಲಾಗಿದೆ. ದಾಖಲಾದ ಸ್ಥಿತಿಯನ್ನಾಧರಿಸಿ ತಪ್ಪಾದ ವರ್ಗೀಕರಣ ಮತ್ತು ಪರಿಹಾರಧನ ನೀಡಿಕೆಗೆ ಇದು ಕಾರಣವಾಗಿದೆ. ನೀರಾವರಿ ಸೌಲಭ್ಯಕ್ಕಾಗಿ ಹಣ ಹೂಡಿದ ಮಾಲೀಕರು ನೀರಾವರಿ ಸೌಲಭ್ಯವಿಲ್ಲದ ಭೂಮಿಗಳಿಗೆ ನೀಡಿದ ಪರಿಹಾರಧನದಷ್ಟೇ ಪರಿಹಾರವನ್ನು ಪಡೆದಿದ್ದಾರೆ. ಇದು ಅತ್ಯಂತ ಕಡಿಮೆ ಮೊತ್ತವಾಗಿದೆ. ಯಾರ ಭೂಮಿಯು ಸರಿಯಾದ ರೀತಿಯಲ್ಲಿ ದಾಖಲಾಗಿದೆಯೋ ಅಂತಹವರು ಪರಿಹಾರಧನವನ್ನು ಒಪ್ಪಿಕೊಳ್ಳುತ್ತಾರೆ. ಪ್ರತಿ ಚದರಕ್ಕೆ ನೀಡುವ ಪರಿಹಾರ ಮೊತ್ತ ಸಮಸ್ಯೆಯಲ್ಲ. ಬದಲಿಗೆ ಸಮಸ್ಯೆಯಿರುವುದು ಭೂಮಿಯ ಬಗೆಯನ್ನು ಗುರುತಿಸುವಲ್ಲಿ. ಆದ್ದರಿಂದಲೇ ಭೂಮಿಯ ಬೆಲೆಯನ್ನು ಲೆಕ್ಕ ಹಾಕಲು ಮಾರುಕಟ್ಟೆಯು ಪರಿಷ್ಕರಿಸಿದ ಸರಿಯಾದ ಭೂ ದಾಖಲೆಗಳನ್ನು ಬೇಡುತ್ತದೆ. ಹೊಸ ಭೂ ಸುಧಾರಣಾ ಮಸೂದೆಯು ಈ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಇದು ಆಡಳಿತಕ್ಕೆ ಸಂಬಂಧಿಸಿದ್ದು ಭೂ ದಾಖಲೆಗಳನ್ನು ನಿಖರಗೊಳಿಸಿ ಸುಲಭವಾಗಿ ಲಭ್ಯವಾಗುವಂತೆ ಕಂಪ್ಯೂಟರೀಕರಣಗೊಳಿಸಬೇಕಾಗಿದೆ. ಭೂ ದಾಖಲೆಗಳನ್ನು ಪರಿಷ್ಕರಿಸಲು ಒಂದು ದಾರಿಯೆಂದರೆ ಮಾಲಿಕರು ಸ್ವತಃ ತಮ್ಮ ಭೂಮಿಯ ವಿವರಗಳನ್ನು ನೀಡಿ ಅದನ್ನು ಸರ್ಕಾರಿ ದಾಖಲೆಗಳಲ್ಲಿ ಅಧಿಕೃತಗೊಳಿಸಿಕೊಳ್ಳಲು ಉತ್ತೇಜಿಸುವುದು. ಮುಖ್ಯ ಸಮಸ್ಯೆಯೆಂದರೆ ಭೂಮಿತಿ ಕಾಯ್ದೆ ಅನ್ವಯ ಭೂಮಿ ಹಂಚುವುದು ಬೇನಾಮಿ ಆಸ್ತಿ ಹೊಂದಿರುವುದು ಮತ್ತು ಅದನ್ನು ಮರೆಮಾಚುವುದನ್ನು ಉತ್ತೇಜಿಸುತ್ತದೆ.
ಮತ್ತೊಂದೆಡೆ ಸಾರ್ವಜನಿಕ ಉದ್ದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳುವ ಸಾಧ್ಯತೆಯಿರುವುದರಿಂದ ಮಾಲೀಕರು ತಮ್ಮ ದಾಖಲೆಗಳನ್ನು ನಿಖರಗೊಳಿಸಿಕೊಳ್ಳಲು ಬಯಸುತ್ತಾರೆ, ಇದು ಒಂದರಲ್ಲಿನ ಸುಧಾರಣೆ ಮತ್ತೊಂದಕ್ಕೆ ಅನುಕೂಲ ಮಾಡಿಕೊಟ್ಟಿರುವುದನ್ನು ಅಂದರೆ ಭೂ ಸುಧಾರಣೆ ಮತ್ತು ಭೂಸ್ವಾಧೀನ ನಡುವಿನ ಪೂರಕ ಸಾಧ್ಯತೆಯನ್ನು ಸೂಚಿಸುತ್ತದೆ. ಹೀಗೆ ಭೂಸ್ವಾಧೀನದ ಭೂ ಮಿತಿಯನ್ನು ಜಾರಿಗೊಳಿಸಲು ಸುಲಭವಾಗುತ್ತದೆ. ಇದರ ಇತರ ಪ್ರಯೋಜನಗಳನ್ನು ಕೂಡ ಗಮನಿಸಬಹುದು. ಇದನ್ನು ಇತರ ಸರ್ಕಾರಿ ಸೇವೆಗಳೊಂದಿಗೆ ಸೇರಿಸುವುದು ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಸಾಲ ಸೌಲಭ್ಯ ಹೆಚ್ಚಿಸುವುದು ಮತ್ತು ಆಹಾರ ಭತ್ಯೆಯನ್ನು ನರೇಗ ಅಥವಾ ಪಡಿತರ ವಿವರಣೆ ಮೂಲಕ ನೀಡುವುದು, ಸಬ್ಸಿಡಿ ಇತ್ಯಾದಿಗಳನ್ನು ಸಹ ಮಾಡಬಹುದು. ನಾವು ಹಲವು ರಾಜ್ಯಗಳಲ್ಲಿ ಅರ್ಧ ದಶಕಕ್ಕಿಂತಲೂ ಹೆಚ್ಚು ಸಮಯದಿಂದ ಭೂ ಸುಧಾರಣಾ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿರುವುದರಿಂದ ಭೂಮಿತಿಯನ್ನು ಸಡಿಲಗೊಳಿಸುವ ಮೂಲಕ ಅಧಿಕಾರಿಗಳಿಗೆ ಇವನ್ನು ಜಾರಿಗೊಳಿಸಲು ನೆರವು ನೀಡಬಹುದು. ಸಾಕ್ಷಿಗಳ ಬೆಳಕಿನಲ್ಲಿ ನೋಡಿದಾಗ ಎಲ್ಲ ರಾಜ್ಯಗಳಲ್ಲೂ ಈ ಭೂಸುಧಾರಣಾ ಕಾಯ್ದೆಯು ನೇತ್ಯಾತ್ಮಕ ಮತ್ತು ಕೃಷಿ ಉತ್ಪಾದನೆಯ ಮೇಲೆ ಗಾಢ ಪರಿಣಾಮ ಬೀರಿರುವುದನ್ನು ಕಾಣಬಹುದು ಮತ್ತು ಭೂಮಿತಿ ಕಾಯ್ದೆಯಿಂದಲೂ ಇದೇ ರೀತಿಯ ನೇತ್ಯಾತ್ಮಕ ಪರಿಣಾಮವನ್ನು ಕಾಣಬಹುದಾಗಿದೆ. ತೆರಿಗೆ ಪಾವತಿಸುತ್ತಿರುವವರು ತಮ್ಮ ದಾಖಲೆಗಳನ್ನು ತೋರಿಸುವಂತೆ ಪ್ರೋತ್ಸಾಹಿಸಬೇಕಾಗಿದೆ. ಕೃಷಿ ಮತ್ತು ಬುಡಕಟ್ಟು ಭೂಮಿಯ ಮಾರಾಟದ ಮೇಲಿನ ನಿಯಮಗಳು ಮತ್ತು ಕಟ್ಟುಪಾಡುಗಳು ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ. ಬದಲಿಗೆ ಅವರಿಗೆ ನೆರವು ನೀಡಬೇಕೆಂದು ಬಯಸುವ ಗುಂಪುಗಳಿಗೆ ನೋವುಂಟುಮಾಡುತ್ತದೆ. ಇದು ಭೂ ಬಳಕೆಗೆ ಅಡ್ಡಿ ಮಾಡುವುದಲ್ಲದೆ ಪರಿಶಿಷ್ಟ ಜಾತಿ / ಪಂಗಡದವರಲ್ಲಿನ ಸಾಮಾಜಿಕ ಚಲನೆಗೂ ತೊಡಕುಂಟುಮಾಡುತ್ತದೆ. ಇವು ಬುಡಕಟ್ಟು ಜನರು ಕೃಷಿಯಿಂದ ಹೊರನಡೆಯದಂತೆ ಮತ್ತು ಬಂಡವಾಳ ಹೂಡದಂತೆ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕೈಗಾರಿಕೀಕರಣ ನಡೆಯದಂತೆ ಎಲ್ಲವನ್ನೂ “ಶೋಷಣೆ” ಎನ್ನುವ ತೋರಿಕೆಯ ಉದ್ದೇಶದಿಂದ ಮಾಡುತ್ತದೆ. ಅವರು ಅರಣ್ಯ ಹಕ್ಕು ಕಾಯ್ದೆಯನ್ನು ಸಂರಕ್ಷಕ ಪ್ರಯತ್ನಗಳೊಂದಿಗೆ ಸಂಘರ್ಷಕ್ಕಿಳಿಯುವಂತೆ ಮಾಡುತ್ತಾರೆ. ಅರಣ್ಯ ಭೂಮಿಯ ಮೇಲಿನ ಆಸ್ತಿ ಹಕ್ಕನ್ನು ಸಕ್ರಮಗೊಳಿಸುವ ಪ್ರಯತ್ನವೆಂದರೆ ಇದನ್ನು ಕೃಷಿಗೆ ಮತ್ತು ಅರಣ್ಯನಾಶಕ್ಕೆ ಅನುವು ಮಾಡಿಕೊಡುವುದು ಎಂದಲ್ಲ, ಬದಲಿಗೆ ಹಕ್ಕುದಾರರಿಗೆ ಒಂದು ವೇಳೆ ತಮ್ಮ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಿಸಬೇಕಾಗಿ ಬಂದಲ್ಲಿ ಅವರಿಗೆ ಪರಿಹಾರಧನ ನೀಡಿ ಅನುಕೂಲ ಮಾಡುವುದು.
ಪ್ರಸ್ತುತ ಹಲವು ಭೂ ನೀತಿಗಳು ಸೋಲುವುದಕ್ಕೆ ಕಾರಣ ಆದರ್ಶ ಮತ್ತು ವಾಸ್ತವತೆ ಎರಡರ ಹೊಂದಾಣಿಕೆ ಇಲ್ಲದಿರುವುದು. ಹಲವು ಉದ್ದೇಶಗಳಾದ ಕೈಗಾರೀಕರಣ ಅಥವಾ ಅರಣೀಕರಣ ಇವುಗಳ ನಡುವೆ ಸಮತೋಲನ ಸಾಧಿಸಲು ಸಾಧ್ಯವಾಗಿಲ್ಲದಿರುವುದು. ಭೂಮಿಯ ಸಮಾನವಾದ ಹಂಚಿಕೆಯು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅಗತ್ಯವಾದದ್ದು. ಆದರೆ ಇದು ಭೂ ಮಾರುಕಟ್ಟೆಯ ಸರಾಗ ಕಾರ್ಯನಿರ್ವಹಣೆ ಮತ್ತು ಭೂ ಬಳಕೆಯೊಂದಿಗೆ ಸಂಘರ್ಷ ಹೊಂದಿಲ್ಲ.
ಓದುಗರೇ, ಈ ರೀತಿ ನಿಮಗೆ ತಿಳಿದಿರುವ ಹೆಚ್ಚಿನ ಪ್ರಚಲಿತ ವಿದ್ಯಮಾನದೊಂದಿಗೆ ಈ ಪ್ರಬಂಧವನ್ನು ಇನ್ನು ಸೊಗಸಾಗಿ ಬರೆಯಬಹುದು.
No comments:
Post a Comment